ಮೈಸೂರು: ಭಾರತದ ಏಕೀಕರಣದ ರೂವಾರಿ, ಭಾರತದ ಮೊದಲ ಗೃಹ ಸಚಿವರು, ಭಾರತ ರತ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150 ನೇ ಜಯಂತಿ ಅಂಗವಾಗಿ ನಗರದಲ್ಲಿ ಬಿಜೆಪಿ ಮೈಸೂರು ಮಹಾನಗರ ಹಾಗೂ ಜಿಲ್ಲಾ ವತಿಯಿಂದ ರಾಷ್ಟ್ರೀಯ ಏಕತಾ ದಿನ ಏರ್ಪಡಿಸಲಾಯಿತು ಏಕತಾ ನಡಿಗೆಯಲ್ಲಿ ಲೋಹಪುರುಷನಿಗೆ ಗೌರವ ನಮನ ಸಲ್ಲಿಸಲಾಯಿತು.
ಶಾಸಕ ಶ್ರೀವತ್ಸ, ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ, ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಸುಬ್ಬಣ್ಣ, ಬಿಜೆಪಿ ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಉದ್ದೇಶಿಸಿ ರಾಜ್ಯ ವಕ್ತಾರರಾದ ಎಂ.ಜಿ ಮಹೇಶ್ ಮಾತನಾಡಿದರು..


