ಚಾಮರಾಜನಗರ : ತಾಲೂಕಿನ ಬಿಸಲವಾಡಿ-ಅರಳವಾಡಿ ವ್ಯಾಪ್ತಿಯಲ್ಲಿ 50ಕ್ಕೂ ಹೆಚ್ಚು ಕಾಡಾನೆ ಹಿಂಡು ಕಾಣಿಸಿಕೊಂಡಿದ್ದು ಈ ಭಾಗದ ಜನರು ಆತಂಕಗೊಂಡಿದ್ದಾರೆ.
ಇಂದು ಬೆಳಗ್ಗೆ 7 ಗಂಟೆ ಸಮಯದಲ್ಲಿ ತಾಲೂಕಿನ ಬಿಸಲವಾಡಿ ಹಾಗೂ ಗಡಿ ಹಂಚಿಕೊಂಡಿರುವ ಅರಳವಾಡಿ ಗ್ರಾಮದ ವ್ಯಾಪ್ತಿಯ ಜಮೀನುಗಳಲ್ಲಿ ಕಾಡಾನೆಗಳ ಹಿಂಡು ಕಾಣಿಸಿಕೊಂಡಿವೆ. ಈ ಭಾಗದ ರೈತರು ಜಮೀನುಗಳಲ್ಲಿ ಬೆಳೆದ ಫಸಲನ್ನು ತುಳಿದು ನಾಶಪಡಿಸಿವೆ.
ಕಾಡಾನೆಗಳ ಹಿಂಡನ್ನು ಕಂಡು ರೈತರು ಆತಂಕಗೊಂಡಿದ್ದು ಜಮೀನುಗಳಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಜಮೀನುಗಳಲ್ಲಿ ಓಡಾಡುತ್ತಿರುವ ಕಾಡಾನೆಗಳ ಹಿಂಡಿನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವಿಷಯ ತಿಳಿದು ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿದ್ದು ಆನೆಗಳನ್ನು ಕಾಡಿನತ್ತ ಓಡಿಸಲು ಕ್ರಮವಹಿಸಿದ್ದಾರೆ.


