Online News in ಕನ್ನಡ

ಏಷಿಯನ್ ಗೇಮ್ಸ್‍ನಲ್ಲಿ ಕಂಚಿನ ಪದಕ ಗೆದ್ದ ಕ್ರೀಡಾಪಟುವಿಗೆ ಸಿಎಂ ಅಭಿನಂದನೆ

ಬೆಂಗಳೂರು, ಆಗಸ್ಟ್ 18- ಇತ್ತೀಚೆಗೆ ನಡೆದ ಏಷ್ಯನ್ ಸರ್ಫಿಂಗ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗಳಿಸಿದ ಭಾರತದ ಪ್ರಪ್ರಥಮ‌ ಸರ್ಫರ್, ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಮುರುಡಿ ತಾಂಡಾದ ಯುವಕ ರಮೇಶ್ ಬೂದಿಹಾಳ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿನಂದಿಸಿದರು.‌ರಾಜ್ಯದ ಹೆಸರನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಎತ್ತರಿಸಿದ ನೀವು ಇನ್ನಷ್ಡು ಸಾಧನೆ ಮಾಡಬೇಕು ಎಂದು ಸರ್ಫರ್ ರಮೇಶ್ ಬೂದಿಹಾಳ ಅವರಿಗೆ ಮುಖ್ಯಮಂತ್ರಿಗಳು ಶುಭ ಹಾರೈಸಿದರು. ಈ ಯುವ ಕ್ರೀಡಾಪಟುವನ್ನು ಸಚಿವ ಹೆಚ್.ಕೆ.ಪಾಟೀಲ್ ಅವರು ಮುಖ್ಯಮಂತ್ರಿಗಳ ಬಳಿ ಕರೆತಂದು ಈತ ಮಾಡಿರುವ ಸಾಧನೆಯನ್ನು ಪರಿಚಯಿಸಿದರು.

Call Now Button